Saturday 26 March 2016

ಅತಿಶಯ ಶಕ್ತಿಯ ಹುಡುಕಾಟದಲ್ಲಿ...

" ದೆವ್ವ/ಭೂತ " ಈ ಪದ ಕೇಳಿದರೆ ಏನೊ ಒಂದು ರೋಮಾಂಚನ. ಈ ದೆವ್ವ/ಭೂತ ಇದೆಯೋ ಇಲ್ಲವೊ ಎಂಬುದು ಒಂದು ತರ್ಕಕ್ಕೆ ಬಿಟ್ಟ ವಿಚಾರ.  ಈ ಲೇಖನದಲ್ಲಿ ನನ್ನ ಒಂದು ಸ್ವಂತ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳ ಬಯಸುತ್ತೇನೆ.


ಅದು 2014 ಮಾರ್ಚಿ ತಿಂಗಳು, ನಾನು MCA ಓದೊದಕ್ಕೆ ಅಂತ ಕೆಂಗೇರಿಯ ಸಮೀಪ ಇರೋ ಹೆಚ್.ಗೊಲ್ಲಹಳ್ಳಿಯಲ್ಲಿ ನನ್ನ ಅಕ್ಕನ ಮನೆಯಲ್ಲಿ ಉಳಿದುಕೊಂಡಿದ್ದೆ. ಒಂದು ಮಧ್ಯಾಹ್ನ ನನ್ನ ಸ್ನೇಹಿತರ ಜೊತೆ ಮಾತನಾಡುತ್ತಾ ಈ ದೆವ್ವದ ವಿಚಾರ ಬಂತು. ನಮ್ಮ ಊರಿಗೆ ಸಮೀಪ ಇರೋ ನೈಸ್ ರೊಡಿನಲ್ಲಿ ಅಪಘಾತಗಳು ಸರ್ವೇ ಸಾಮನ್ಯ. ಹೀಗೆ ಅಪಘಾತದಲ್ಲಿ ಸತ್ತ ವ್ಯಕ್ತಿಗಳು ದೆವ್ವವಾಗಿ ದಾರಿಹೊಕರ ಬಲಿ ತೆಗೆದುಕೊಳ್ಳುತ್ತವೆ ಎಂಬುದು ಅಲ್ಲಿನ ಸ್ಥಳೀಯರ ವಾದ. ನನ್ನ ಸ್ನೇಹಿತರು ಈ ವಿಚಾರವನ್ನು ಬಹಳವಾಗಿ ನಂಬಿದ್ದರು ಮತ್ತು ರಾತ್ರಿಯ ವೇಳೆ ಓಡಾಡಲು ಬಹಳ ಹೆದರುತ್ತಿದ್ದರು. ವಾಸ್ತವವಾದಿಯಾದ ನಾನು ದೆವ್ವ/ಭೂತದ ಅಸ್ತಿತ್ವವನ್ನು ಪರಾಮರ್ಶಿಸದೆ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಇದೇ ವಿಷಯಕ್ಕೆ ನನ್ನ ಮತ್ತು ನನ್ನ ಸ್ನೇಹಿತರ ನಡುವೆ ಒಂದು ಸ್ಪರ್ಧೆ ಏರ್ಪಟ್ಟಿತ್ತು ಅದೇನೆಂದರೆ ನಾನು ನಡುರಾತ್ರಿ ನೈಸ್ ರೋಡ್ ಮುಖ್ಯ ಕಛೇರಿಯಿಂದ (ಚೆನ್ನವೀರಯ್ಯನ ಪಾಳ್ಯ, ಹೊಸೂರು ರಸ್ತೆ) ನಮ್ಮ ಮನೆಗೆ ನಡೆದು ಬರಬೇಕು ಎಂದು. ಈ ನಡುವೆ ಎಂಥಾ ದೈರ್ಯವಂತರನ್ನು ಹೆದರಿಸುವಂತ ಮೂರು ಸ್ಥಳಗಳು ಮಾರ್ಗ ಮಧ್ಯೆ ಬರುತ್ತವೆ. ನೈಸ್ ಕೇಂದ್ರ ಕಛೇರಿಯ ರಸ್ತೆ, ಮಾವಿನ ತೋಟ ಮತ್ತು ಗೊಲ್ಲಹಳ್ಳಿ ಕೆರೆ.


ನೈಸ್ ಮುಖ್ಯ ಕಛೇರಿಯ ರಸ್ತೆ

ಸರಿಯೆಂದು ನಾನು ಸವಾಲು ಸ್ವೀಕರಿಸಿದೆ ಹಾಗು ನನ್ನ ಜೊತೆ ಮತ್ತೊಬ್ಬ ಸ್ನೇಹಿತ ಬರೊಕೆ ಒಪ್ಪಿದ. ಅಂದು ರಾತ್ರಿ ಸರಿಸುಮಾರು ೧೧ ಘಂಟೆ ಸಮಯ ನಾನು ಮತ್ತು ನನ್ನ ಸ್ನೇಹಿತ ಇಬ್ಬರು ನೈಸ್ ರೊಡಿಗೆ ನಡೆದುಕೊಂಡು ಹೊದೆವು. ನಾವು ನೈಸ್ ರೋಡ್ ತಲುಪುವ ಹೊತ್ತಿಗೆ ಸಮಯ ೧೧:೩೦ ದಾಟಿತ್ತು, ಅಲ್ಲಿಂದ ನಮ್ಮ ಇತರ ಸ್ನೇಹಿತರಿಗೆ ಫೊನ್ ಮಾಡಿ ತಾವು ಜಾಗ ತಲುಪಿರುವ ಬಗ್ಗೆ ಮಾಹಿತಿ ನೀಡಿದೆವು ಮತ್ತು ೧೨ ಘಂಟೆಗೆ ಸರಿಯಾಗಿ ನಾವು ತಿರುಗಿ ಬರುತ್ತೇವೆ ಎಂದು ತಿಳಿಸಿದೆವು. ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಹೊರಟೆವು. ನೈಸ್ ಕೇಂದ್ರ ಕಛೇರಿ ರಸ್ತೆಯಿಂದ ಹೊರಟ ನಮಗೆ ಯಾವುದೇ ಭಯ ಇರಲಿಲ್ಲ ದೈರ್ಯ ಮತ್ತು ಆತ್ಮಸ್ಥೈರ್ಯದಿಂದ ಹೊರಟೆ ನಮಗೆ ಚೆನ್ನವೀರಯ್ಯನ ಪಾಳ್ಯ ಬರುವ ಹೊತ್ತಿಗೆ ಏನೋ ಭಯ ಆವರಿಸಿತ್ತು.


ರಸ್ತೆ ಬದಿಯ ಮಾವಿನ ತೋಟ


ನಿಶ್ಯಬ್ದ ವಾತಾವರಣ, ಅತೀವ ಕತ್ತಲು ಮತ್ತು ನಾಯಿ-ಗೂಬೆಗಳ ಆರ್ತನಾದ ಇದಿಷ್ಟು ಸಾಕಲ್ಲವೆ ಭಯ ಹುಟ್ಟಿಸಲು.?   ಮೊಬೈಲ್ ಟಾರ್ಚ್ ನ ಬೆಳಕು ನಮಗೆ ಸಣ್ಣಗೆ ದಾರಿ ತೊರುತ್ತಿತ್ತು. ಚನ್ನವೀರಯ್ಯನ ಪಾಳ್ಯ ದಾಟಿ ಮಾವಿನ ತೋಟದ ಹತ್ತಿರ ಬಂದಾಗ ಯಾರೋ ನಮ್ಮನ್ನು ಹಿಂಬಾಲಿಸಿ ಬರೂ ಅನುಭವವಾಯಿತು. ತಿರುಗಿ ನೋಡಿದರೆ ಯಾರು ಇಲ್ಲ, ಸ್ವಲ್ಪ ಭಯ ಮತ್ತು ಹೆಚ್ಚಿದ ಹೃದಯ ಬಡಿತ. ಹಾಗೆ ಮಾವಿನ ತೋಟದ ಮದ್ಯಕ್ಕೆ ಬರುವ ಸಮಯ ಯಾರೊ ಚೀರುವ ದ್ವನಿ ನಮ್ಮನ್ನು ತಬ್ಬಿಬ್ಬು ಮಾಡಿತ್ತು, ಊರಿನಿಂದ ತುಂಬಾ ದೂರ ಮತ್ತು ನಿರ್ಜನ ಪ್ರದೇಶ, ಕೂಗಿದರು ಯಾರು ಸಹಾಯಕ್ಕೆ ಬರದಂತಹ ಜಾಗ. ಭಯದಲ್ಲಿ ಕೈ-ಕಾಲು ನಡುಕ ಶುರುವಾಗಿತ್ತು. ನನ್ನ ಸ್ನೇಹಿತ ಅಂತೂ ಭಯದಲ್ಲಿ ಬೆವತು ಹೊಗಿದ್ದ ಹೇಗಾದರು ಊರು ಸೇರಿದರೆ ಸಾಕೆನ್ನುವ ತವಕ. ಯಾಕಾದರು ಈ ಪಂದ್ಯಕ್ಕೆ ಒಪ್ಪಿಕಂಡೆವೊ ಎಂದು ನಮ್ಮನ್ನು ನಾವೇ ಶಪಿಸುತ್ತಾ ಹಾಗೆ ಊರಿನ ದಾರಿ ಹಿಡಿದೆವು. ನಮ್ಮ ಮುಂದಿನ ಪಯಣ ಕೆರೆ ಏರಿ ದಾಟುವುದು, ಅದು ನಮಗೆ ಇನ್ನೊಂದು ಜನ್ಮ ಪಡೆದಂತೇ ಸರಿ.



ಕೆರೆಯ ಏರಿ (ಕಾಲ್ಪನಿಕ ಚಿತ್ರ)


ಕೆರೆ ಸಮೀಪ ಬರುವ ಹೊತ್ತಿಗೆ ಪ್ರಾಣಹೊದ ಅನುಭವ. ಮನದಲ್ಲಿ ಏನೋ ಸಂಕಟ ಕೆರೆ ಏರಿ ತಲಿಪಿದ ನಮಗೆ ಕೆರೆ ನೋಡಲು ಭಯ. ಕಣ್ಣುಮುಚ್ಚಿ-ತೆರೆದು ಕೈ ಕೈ ಹಿಡಿದು ನಡೆಯಲು ಪ್ರಾರಂಭಿಸಿದೆವು. ಈ ನಡುವೆ ಕೆರೆಯ ಬದಿಯಲ್ಲಿ ಒಂದು ಬೆಳಕು ನಮ್ಮನ್ನೇ ಹಿಂಬಾಲಿಸಿ ಬರುತ್ತಿತ್ತು, ಭಯದಿಂದ ನಮ್ಮ ವೇಗ ಹೆಚ್ಚಿಸಿದೆವು. ಹಾಗೋ ಹೀಗೊ ನಮ್ಮ ಊರು ತಲುಪಿದೆವು. ಅಲ್ಲಿ ನಮಗಾಗಿ ಇತರ ಸ್ನೇಹಿತರು ನಮ್ಮ ಬರುವಿಕೆಗಾಗಿ ಕಾದು ನಿಂತಿದ್ದರು. ನಮ್ಮನ್ನು ಆತ್ಮೀಯತೆಯಿಂದ ಸ್ವಾಗತಿಸಿ ನಮ್ಮ ಅನುಭವದ ಬಗ್ಗೆ ವಿಚಾರಿಸಿದರು. ನಾವು ಅವರ ಬಳಿ ನಮಗೆ ಮಾವಿನ ತೋಟದಲ್ಲಿ ನಮ್ಮನ್ನು ಯಾರೊ ನಡೆದು ಹಿಂಬಾಲಿಸಿದ ಅನುಭವ ಮತ್ತು ಕೆರೆಯ ಏರಿಯ ಮೇಲೆ ನಮ್ಮನ್ನು ಹಿಂಬಾಲಿಸಿದ ಬೆಳಕಿನ ಬಗ್ಗೆ ವಿವರವಾಗಿ ಹೇಳಿದೆವು. ಭಯದಲ್ಲಿ ನಡುಗುತ್ತಿದ್ದ ನಮ್ಮನ್ನ ನೋಡಿದ ಅವರು ಮಾವಿನ ತೋಟದಲ್ಲಿ ನಡದಾಡಿದ ಮತ್ತು ಕೆರೆಯ ಏರಿಯಲ್ಲಿ ನೋಡಿದ ಬೆಳಕಿನ ಬಗ್ಗೆ ತಿಳಿಸಿದರು. ಮಾವಿನ ತೋಟದಲ್ಲಿ ನಮ್ಮನ್ನು ಹಿಂಬಾಲಿಸಿದ ಹೆಜ್ಜೆ ನಮ್ಮ ಸ್ನೇಹಿತರದ್ದೇ ಹಾಗಿತ್ತು. ನಮಗಿಂತ ಮೊದಲೆ ಮಾವಿನ ತೋಟದಲ್ಲಿ ಅವಿತು ನಮ್ಮ ಬರುವಿಕೆಯನ್ನೇ ಕಾದು ಹೆಜ್ಜೆ ಸಪ್ಪಳ ಮಾಡಿದ್ದು ಬಯಲಾಯಿತು, ಕೆರೆಯ  ಬದಿಯಲ್ಲಿ ಟಾರ್ಚ್ ಮುಖಾಂತರ ಬೆಳಕು ಹರಿಸಿದ್ದು ಅವರೇ ಎಂದು ಒಪ್ಪಿಕೊಂಡರು. ಅಂದು ತುಸು ಜಂಬದಿಂದಲೆ ಗೆದ್ದಿದ್ದು ನಾವೇ ಎಂದು ಮೀಸೆ ತಿರುಗುತ್ತಾ ನಮ್ಮ ಮನೆಯ ಕಡೆ ನಡೆದೆವು. ಇದಾದ ಕೆಲವು ದಿನ ಅದೇ ನೆನೆಪು ಬೆಂಬಿಡದಂತೆ ನಮ್ಮನ್ನು ಕಾಡುತ್ತಿತ್ತು. ನಿದ್ದೆಯಿಲ್ಲದ ರಾತ್ರಿಗಳು, ದೆವ್ವ ಭೂತದ ಇರುವಿಕೆ/ಇಲ್ಲದಿರುವಿಕೆ, ಯಾವುದು ಸತ್ಯ? ಯಾವುದು ಸುಳ್ಳು? ಈ ಎಲ್ಲಾ ಪ್ರಶ್ನೆಗಳು ಕೇವಲ ಪ್ರಶ್ನೆಗಳಾಗೆ ಉಳಿದವು.

ನನಗೆ ಇದು ಒಂದು ಹೊಸ ಅನುಭವವಾಗಿದ್ದು, ಮತ್ತು ಬಹಳ ರೋಚಕತೆಯಿಂದ ಕೂಡಿತ್ತು.

ನಿಮಗೆ ಇದರಿಂದ ಏನಾದರು ರೋಮಾಂಚನ ಹಾಗಿದ್ದರೆ ಕೆಳಗೆ ಕಾಮೆಂಟ್ ಮಾಡಿ, ಏನಾದರು ತಪ್ಪುಗಳಿದ್ದರೆ ತಿಳಿಸಿ. ಮುಂದಿನ ಲೇಖನದಲ್ಲಿ ಸರಿಪಡಿಸಲು ನನಗೆ ಸಹಕಾರಿಯಾಗುತ್ತದೆ.

ಧನ್ಯವಾದಗಳು

-ಮಧುಸೂದನ್ (maddy)

Tuesday 22 March 2016

ಎಂದೂ ಅಳಿಯದ ಮಹಾನ್ ಚೇತನ "ಶಹೀದ್ ಭಗತ್ ಸಿಂಗ್"

ರಾಜಕೀಯ ನಾಯಕರು ಮರೆತ ನಮ್ಮ ಭಗತ್ ಸಿಂಗ್




45 ವರ್ಷವಾದರು ಇನ್ನೂ ಯುವಕರ ಪ್ರತಿನಿಧಿ ಎಂದು ಬಿಂಬಿಸಿಕೊಳ್ಳುವ " ಕಾಂಗ್ರೇಸ್ ಯುವರಾಜ " ಒಂದು ಕಡೆಯಾದರೆ, ತನ್ನ 23ನೇ ವಯಸ್ಸಿಗೆ ದೇಶಕ್ಕಾಗಿ ಪ್ರಾಣತೆತ್ತ ಮಹಾನ್ ದೇಶಪ್ರೇಮಿ ಮತ್ತೊಂದೆಡೆ. ವಯಸ್ಸು 45 ಆದ್ರು ಇನ್ನು ಅಮ್ಮನ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುವ ವ್ಯಕ್ತಿಗೆ ಯುವರಾಜನ ಪಟ್ಟಾ ಕಟ್ಟೋ ಕಾಂಗ್ರೇಸ್ಸಿಗರು, ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ವ್ಯಕ್ತಿಗೆ ಹುತಾತ್ಮ ಎಂದು ಹೇಳಲು ಹಿಂಜರಿಯುವುದು ಬಹಳ ದುರ್ದೈವದ ಸಂಗತಿ. 1907 ಸೆಪ್ಟೆಂಬರ್ 27 ರಂದು ಹುಟ್ಟಿ ಕೇವಲ 23 ವರ್ಷದವರಿದ್ದಾಗಲೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ಸ್ವಾತಂತ್ರ್ಯಯೋಧ ಶಹೀದ್ ಭಗತ್ ಸಿಂಗ್ ಅವರ ನೆನಪು ಎಷ್ಟು ಜನರಿಗಿದೆ? ಇನ್ ಕ್ವಿಲಾಬ್ ಜಿಂದಾಬಾದ್ ಎನ್ನುತ್ತಲೇ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರಯೋಧನನ್ನು ನೆನೆಯಲು ಪಾಪ ನಮ್ಮ ರಾಜಕಾರಣಿಗಳಿಗೆ ಮರೆವಿನ ರೋಗ. ಕಾಂಗ್ರೆಸ್ ಪಕ್ಷದಿಂದ ಇದನ್ನು ನಿರೀಕ್ಷಿಸಲೂ  ಸಾಧ್ಯವಿಲ್ಲ. ಸ್ವಾತಂತ್ರ್ಯ ಯೋಧರಾದ ಸುಭಾಶ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಅವರಿಗೆ ಭಯೋತ್ಪಾದಕ ಹಣೆಪಟ್ಟಿ ಕಟ್ಟಿದ್ದೇ ಕಾಂಗ್ರೆಸ್ ಪಕ್ಷ. ಈ ಕಾರಣ ಭಗತ್ ಸಿಂಗ್ ಮೊಮ್ಮಗ ಅಭಯ್ ಸಿಂಗ್ ಸಂಧು ಆರೋಪಿಸಿದ್ದರೂ ಕೂಡ.  ಇಂದು ನೆಹರು-ಗಾಂಧಿ ಜಯಂತಿಯನ್ನು ಸರ್ಕಾರ ನಡೆಸಿದರೆ, ಭಗತ್-ಸಾವರ್ಕರ್ ಜನ್ಮದಿನಾಚರಣೆ ದೇಶದ ಯುವಕರು ನಡೆಸುತ್ತಾರೆ. ಇದು ದೇಶಭಕ್ತನಿಗೆ ದೇಶದ ಜನತೆ ತೊರುವ ಅಭಿಮಾನ. ಭಾರತದ ಸ್ವಾತಂತ್ರ್ಯಕ್ಕಾಗಿ ಉಗ್ರ ಹೋರಾಟ ನಡೆಸಿದ್ದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು 1931ರ ಮಾರ್ಚ್ 23ರಂದು ನೇಣಿಗೇರಿಸಲಾಗಿತ್ತು. ಇವರಲ್ಲಿ ಭಗತ್ ಸಿಂಗ್ ಅವರನ್ನು ಅತ್ಯಂತ ಪ್ರಭಾವಶಾಲಿ ಕಾಂತ್ರಿಕಾರಿ ನಾಯಕ ಎಂದು ಬಣ್ಣಿಸಲಾಗಿದೆ. ನೌಜವಾನ್ ಭಾರತ್ ಸಭಾ, ಕೀರ್ತಿ ಕಿಸಾನ್ ಪಾರ್ಟಿ, ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಮುಂತಾದ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಭಗತ್ ಯುವಕರಲ್ಲಿ ಸ್ವಾತಂತ್ರ್ಯದ ಕಿಡಿ ಹಚ್ಚಿದ್ದರು. ಭಗತ್ ಅಂದು ಮಾತ್ರವಲ್ಲ ಯುವಕರಿಗೆ ಇಂದಿಗೂ ಸ್ಫೂರ್ತಿದಾಯಕವಾಗಿದ್ದಾರೆ. ಲಾಲಾ ಲಜಪತ್ ರಾಯ್ ಅವರ ಕೊಲೆಗೆ ಪ್ರತೀಕಾರವಾಗಿ ಬ್ರಿಟಿಷ್ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟು ಸಾಯಿಸಿದ ಆರೋಪ ಹೊತ್ತಿದ್ದ ಭಗತ್ ಜೈಲಿನಲ್ಲಿ ಕೂಡ ಭಾರತೀಯ ಜೈಲುಹಕ್ಕಿಗಳಿಗೆ ಬ್ರಿಟಿಷರಷ್ಟೇ ಸ್ವಾತಂತ್ರ್ಯ ನೀಡಬೇಕೆಂದು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇನ್ನೂ ಮೀಸೆ ಚಿಗುರುವ ಹಂತದಲ್ಲಿಯೇ ಮುರುಟಿಹೋದ ವೀರಯೋಧನಿಗೆ ಈ ಮೂಲಕವಾದರೂ ನೆನೆಯೋಣ. ಅವರ ಸ್ಫೂರ್ತಿ ಸೆಲೆಯನ್ನು ಜೀವಂತವಾಗಿಡೋಣ.





ನಮಗೆ ಗೊತ್ತಿರದ ಭಗತ್ ಸಿಂಗ್

     
     ಮಾರ್ಚ್ 23, 1931 ಶಹೀದ್ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಅರ್ಪಿಸಿದ ದಿನ. ಅತೀ ಕಡಿಮೆ  ವಯಸ್ಸಿನಲ್ಲಿ ಭಗತ್ ಸಿಂಗ್ ಮಾಡಿದ ಸಾಧನೆ ಇಂದಿನ ಯುವಜನತೆಗೆ ಇಂದಿಗೂ ಪ್ರೇರಣೆಯಾಗಿದೆ. ಭಾರತ ಕಂಡ ಅಪ್ರತಿಮ ಕ್ರಾಂತಿಕಾರಿ ಮತ್ತು ಸ್ವಾತಂತ್ರ ಹೊರಾಟಗಾರನ ಬಗ್ಗೆ ತಿಳಿಯದವರೇ ಇಲ್ಲ. ಆದರೂ, ಅವರ ಬಗ್ಗೆ ತಿಳಿಯದ ಕೆಲವುಸಂಗತಿಗಳನ್ನು ಐಬಿಎನ್ ಲೈವ್ ದಾಖಲಿಸಿದೆ.

1. ಭಗತ್ ಕಾಲೇಜಿನಲ್ಲಿ ಉತ್ತಮ ನಟರೂ ಹಾಗಿ ಅನೇಕ ನಾಟಕಗಳಲ್ಲಿ ಭಾಗವಹಿಸಿದ್ದರು. ರಾಣಾ ಪ್ರತಾಪ್, ಸಾಮ್ರಾಟ್ ಚಂದ್ರಗುಪ್ತ, ಭಾರತ ದುರ್ದಶ ಮುಂತಾದ ನಾಟಕಗಳಲ್ಲಿನ ಉತ್ತಮ ಅಭಿನಯಕ್ಕಾಗಿ ಶಿಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು.

2. ಏಪ್ರಿಲ್ 13, 1919ರಂದು ನಡೆದ ಜಲಿಯನ್ ವಾಲಾ ಬಾಗ್ ದುರಂತ ನಡೆದ ದಿನ ಶಾಲೆಯಿಂದ ತಪ್ಪಿಸಿಕೊಂಡ ಹೋದ ಭಗತ್ ಸಿಂಗ್ ದುರಂತ ನಡೆದ ಸ್ಥಳಕ್ಕೆ ಹೋಗಿ ಖಾಲಿ ಬಾಟಲಿಯಲ್ಲಿ ರಕ್ತಸಿಕ್ತವಾಗಿದ್ದ ಮಣ್ಣನ್ನು ತುಂಬಿಕೊಂಡು ಬಂದಿದ್ದ. ನಂತರ ಅದನ್ನು ಪ್ರತಿದಿನವೂ ಪೂಜಿಸುತ್ತಿದ್ದ. ಆಗ ಅವನಿಗೆ ಕೇವಲ 12 ವಯಸ್ಸು. 

3. ಚಿಕ್ಕವನಿದ್ದಾಗ ಭಗತ್ ಸಿಂಗ್ ಬ್ರಿಟಿಷರೊಂದಿಗೆ ಹೋರಾಟ ನಡೆಸಲು ಹೊಲಗದ್ದೆಗಳಲ್ಲಿ ಭತ್ತದ ಬದಲು ಬಂದೂಕುಗಳನ್ನು ಬೆಳೆಯಬೇಕೆಂದು ಎಲ್ಲರೆದಿರು ಹೇಳುತ್ತಿದ್ದ ಕ್ರಾಂತಿ ಎಂಬುದು ಬಾಲ್ಯದಿಂದಲೆ ಆತನನ್ನು ಆವರಿಸಿತ್ತು.

4. ಬಾಲ್ಯ ವಿವಾಹವನ್ನು ತಪ್ಪಿಸಿಕೊಳ್ಳಲು ಭಗತ್ ಮನೆಯಿಂದ ಪರಾರಿಯಾಗಿದ್ದ. ಮದುವೆಯಾಗುವುದು ಏನು ದೊಡ್ಡ ಸಾಧನೆಯಾ? ಎಂದು ತನ್ನ ಸಹಪಾಠಿಗಳನ್ನು ಕೇಳುತ್ತಿದ್ದ. ಮದುವೆ ಯಾರಾದರೂ ಆಗಬಹುದು, ಆದರೆ ನನ್ನ ಗುರಿ ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಎಂದು ಎದೆತಟ್ಟಿ ಹೇಳುತ್ತಿದ್ದ. 

5. ಲೆನಿನ್ ನ ಅಕ್ಟೋಬರ್ ಕ್ರಾಂತಿ ಭಗತ್ ನನ್ನು ಬಹುವಾಗಿ ಆಕರ್ಷಿಸಿತು. ಚಿಕ್ಕಪ್ರಾಯದಲ್ಲೇ ಸಾಮಾಜಿಕ ಕ್ರಾಂತಿ ಕುರಿತ ಅನೇಕ ಪುಸ್ತಕಗಳನ್ನು ಓದಲಾರಂಭಿಸಿದ.

6. ಸಿಂಗ್ ಹೇಳಿದ ಈ ಮಾತು ಎಂದಿಗೂ ಅಜರಾಮರ, "ಅವರು ನನ್ನನ್ನು ಕೊಲ್ಲಬಹುದು, ಆದರೆ ನನ್ನ ಚಿಂತನೆಗಳನ್ನು ಕೊಲ್ಲಲಾರರು. ಅವರು ನನ್ನ ದೇಹವನ್ನು ಹೊಸಕಿ ಹಾಕಬಹುದು, ಆದರೆ ನನ್ನ ಸ್ಫೂರ್ತಿಯನ್ನು ಹೊಸಕಿ ಹಾಕಲು ಸಾಧ್ಯವೇ ಇಲ್ಲ.

7. ದೆಹಲಿಯ ಸೆಂಟ್ರಲ್ ಅಸೆಂಬ್ಲಿಯ ಮೇಲೆ ಭಗತ್ ಮತ್ತು ಸಹಚರರು ಎಸೆದ ಬಾಂಬುಗಳು ಕಡಿಮೆ ತಾಕತ್ತಿನ ಸ್ಫೋಟಕಗಳಾಗಿದ್ದವು. ಅಲ್ಲಿ ಕಾರಿಡಾರಿನಲ್ಲಿ ನೆರೆದಿದ್ದ ಜನರನ್ನು ಬೆದರಿಸಿ ಓಡಿಸಲು ಮಾತ್ರ ಅವನ್ನು ಬಳಸಲಾಗಿತ್ತು. ಇದನ್ನು ಬ್ರಿಟಿಷ್ ತನಿಖೆ ಕೂಡ ದೃಢಪಡಿಸಿದೆ. 




8. 1930ರಲ್ಲಿ ಜೈಲಿನಲ್ಲಿದ್ದಾಗ 'ರಾಜಕೀಯ ಸೆರೆಯಾಳು' ಎಂಬ ಪದವನ್ನು ಹುಟ್ಟುಹಾಕಿದ್ದೇ ಭಗತ್. ತನಗೆ ಮತ್ತು ತನ್ನ ಸಹಚರರಿಗೆ ಎಲ್ಲ ಸವಲತ್ತುಗಳನ್ನು ಕೊಡಬೇಕೆಂದು ಆಗ್ರಹಿಸಿದ್ದರು. ಅಲ್ಲಿ ಬ್ರಿಟಿಷ್ ಕಳ್ಳರು, ದಂಗೆಕೋರರಿಗೆ ನೀಡುತ್ತಿದ್ದ ಸವಲತ್ತುಗಳನ್ನು ಭಾರತೀಯ ಕೈದಿಗಳಿಗೆ ನೀಡುತ್ತಿರಲಿಲ್ಲ. 

9. " ಇನ್ ಕ್ವಿಲಾಬ್ ಜಿಂದಾಬಾದ್ " ಎಂದು ಘೋಷಣೆ ಮಾಡಿದ್ದು ಭಗತ್ ಸಿಂಗ್. ಮುಂದೆ ಇದೇ ಘೋಷಣೆ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಘೋಷವಾಕ್ಯವೂ ಆಯಿತು. 

10. ನಿಗದಿಪಡಿಸಿದ ವೇಳೆಗಿಂತ ಒಂದು ಗಂಟೆ ಮೊದಲೇ ಭಗತ್ ನನ್ನು ಗಲ್ಲಿಗೇರಿಸಲಾಯಿತು ಮತ್ತು ರಹಸ್ಯವಾಗಿ ಆತನ ಸತ್ಲೆಜ್ ನದಿಯ ತಟದ ಮೇಲೆ ಜೈಲು ಅಧಿಕಾರಿಗಳಿಂದ ಅಂತ್ಯಕ್ರಿಯೆ ನಡೆಸಲಾಯಿತು. ಇದು ಜನರ ಕಿವಿಗೆ ಬೀಳುತ್ತಿದ್ದಂತೆ ಪ್ರತಿಭಟನೆ ನಡೆಸಿ ಆತನ ಚಿತಾಭಸ್ಮದೊಡನೆ ಮೆರವಣಿಗೆಯನ್ನೂ ನಡೆಸಿದರು.


Most Haunted Places in India ಎನ್ನುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ರಾಜಸ್ಥಾನದಲ್ಲಿರುವ ಬಾಂಗ್ರಾ ಕೋಟೆ.
ಬಾಂಗ್ರಾ ಕೋಟೆಯಲ್ಲಿ ಸೂರ್ಯೋದಯದ ಮೊದಲು ಮತ್ತು ಸೂರ್ಯಾಸ್ತದ ನಂತರ ಯಾರಿಗೂ ಪ್ರವೇಶವಿಲ್ಲ ಎಂಬ ಬೋರ್ಡನ್ನು ಭಾರತೀಯ ಪುರಾತತ್ವ ಇಲಾಖೆಯೇ ತಗುಲಿಹಾಕಿದೆಯಂತೆ. ಈ ಎಚ್ಚರಿಕೆಯನ್ನು ಮೀರಿ ಸೂರ್ಯಾಸ್ತದ ನಂತರ ಕೋಟೆಯಲ್ಲಿಯೇ ಉಳಿಯಲೆತ್ನಿಸಿದವರು ಮರಳಿಬಂದಿಲ್ಲವೆಂಬುದು ಅಲ್ಲಿನ ಗ್ರಾಮಸ್ಥರ ಅಂಬೋಣ. ಸತ್ಯವೋ,ಸುಳ್ಳೋ ಗೊತ್ತಿಲ್ಲ. ಈ ಭೂತದ ಕೋಟೆಯ ಹಿಂದೆ ಎರಡು ಮೂರು ಕತೆಗಳಿವೆ. ಆ ಊರಿನಲ್ಲಿ ಬಾಬಾ ಬಾಲಾನಾಥ್ ಎಂಬ ಸಾಧುವೊಬ್ಬರು ವಾಸವಿದ್ದರಂತೆ. ಅವರ ಮನೆಗಿಂತ ಎತ್ತರದ ಮನೆ ಸುತ್ತ-ಮುತ್ತ ಎಲ್ಲಿಯೂ ಇರಬಾರದು. ಹಾಗೇನಾದರೂ ಯಾರಾದರೂ ಎತ್ತರದ ಮನೆ ಕಟ್ಟಿ ಅದರ ನೆರಳು ತನ್ನ ಮನೆಯ ಮೇಲೆ ಬಿದ್ದ ದಿನವೇ ಈ ಊರು ಪಾಳು ಬೀಳುತ್ತದೆ ಎಂದಿದ್ದರಂತೆ, ಅದನ್ನು ಮೀರಿದ್ದರಿಂದಾಗಿ ಈ ಊರಿಗೆ ಭೂತ ಮೆಟ್ಟಿಕೊಂಡಿದೆಯೆಂಬುದು ಒಂದು ಬದಿಯ ಕತೆ.  ಇನ್ನೊಂದು ಫೇಮಸ್ ವರ್ಶನ್ನಿನ ಪ್ರಕಾರ, ಆ ಊರಿನಲ್ಲಿದ್ದ ದುಷ್ಟ ಮಾಂತ್ರಿಕನಿಗೆ ರಾಜಕುಮಾರಿ ರತ್ನಾವತಿಯ ಮೇಲೆ ಮೋಹವಾಗುತ್ತದೆ. ಒಮ್ಮೆ ರಾಜಕುಮಾರಿ ತನ್ನ ಸಖಿಯರೊಡನೆ ವಿಹಾರಕ್ಕೆಂದು ಬಂದವಳು ಸುಗಂಧ ದ್ರವ್ಯವನ್ನು ಖರೀದಿಸಲು ಹೋಗುತ್ತಾಳೆ. ಆಗ ಈ ಮಾಂತ್ರಿಕ ಸುಗಂಧ ದ್ರವ್ಯದ ಜಾಗದಲ್ಲಿ ಆಕೆಯನ್ನು ವಶೀಕರಣ ಮಾಡಿಕೊಳ್ಳುವ ದ್ರವ್ಯವನ್ನಿರಿಸುತ್ತಾನೆ. ಸ್ವತಃ ತಂತ್ರ ವಿದ್ಯೆಗಳನ್ನು ಬಲ್ಲವಳಾಗಿದ್ದ ರಾಜಕುಮಾರಿ ಆ ದ್ರವ್ಯವನ್ನು ತೆಗೆದುಕೊಂಡು ಎದುರಿಗಿದ್ದ ಬಂಡೆಕಲ್ಲಿಗೆ ಎರಚುತ್ತಾಳೆ. ಮಾಂತ್ರಿಕನ ಮೋಹಕ್ಕೊಳಗಾದ ಬಂಡೆ ಆತನ ಮೇಲೆ ಉರುಳುತ್ತದೆ.ಸಾಯುವ ಮೊದಲು ಆ ಮಾಂತ್ರಿಕ ಈ ಊರು ನಾಶವಾಗಿ ಹೋಗಲಿ ಮತ್ತು ಈ ಕೋಟೆಯ ಒಳಗೆ ಯಾರು ವಾಸ ಮಾಡದಂತಾಗಲಿ ಎಂದು ಶಾಪವಿತ್ತನಂತೆ. ಅದಾಗಿ ಕೆಲವೇ ದಿನಗಳಲ್ಲಿ ಮೊಘಲರು ಈ ಕೋಟೆಯ ಮೇಲೆ ಆಕ್ರಮಣ ಮಾಡಿದ್ದರಂತೆ. ಈಗಲೂ ರಾಜಕುಮಾರಿ ಹಾಗೂ ಮಾಂತ್ರಿಕನ ಆತ್ಮಗಳು ಕೋಟೆಯೊಳಗಿವೆ ಮತ್ತು ರಾತ್ರಿಯ ವೇಳೆ ಅಲ್ಲಿ ಉಳಿಯಲು ಹೋದವರಿಗೆ ಉಳಿಗಾಲವಿಲ್ಲ ಎಂದೇ ಹೇಳಲಾಗುತ್ತದೆ. ರಾಜಸ್ಥಾನದ ಪ್ರವಾಸಕ್ಕೆ ಹೊರಟಾಗ ಇಂತಹ ಭೂತದ ಕೋಟೆಯನ್ನೂ, ಭೂತಗಳನ್ನೂ ನೋಡುವ ಕಾರ್ಯಕ್ರಮ ನಮ್ಮ ಪಟ್ಟಿಯಲ್ಲಿವಲ್ಲ ಅಂತೊಂದು ಕೊರಗಿತ್ತು ನನಗೆ. ಆದರೆ ಆ ಕೊರಗು ಬೇರೆ ರೀತಿಯಲ್ಲಿ ಪರಿಹಾರವಾಗುತ್ತದೆಂದು ತಿಳಿದಿರಲಿಲ್ಲ. ಜೈಸಲ್ಮೇರಿನ ಮರಳುಗಾಡಿನಲ್ಲಿ ನಾವು ಉಳಿದುಕೊಂಡಿದ್ದ ಜಾಗದ ಮಾಲೀಕನ ಜೊತೆ ರಾತ್ರಿ ಹರಟುತ್ತ, ಇಲ್ಲೇನಾದರೂ ಭೂತಗಳಿರುವ ಸ್ಥಳವಿದೆಯೇ ಅಂತ ಕೇಳಿದೆ. ಒಂದಿಡಿ ಊರೇ ಇದೇ ಸರ್ ! ಕುಲ್ಧರ ಅಂತ ಅದರ ಹೆಸರು. ಜೈಸಲ್ಮೇರಿನಿಂದ ವಾಪಸ್ ಇಲ್ಲಿಗೆ ಬರುವಾಗ ಸಿಗುತ್ತದೆ, ನಾಳೆ ನೋಡಬಹುದು ಎಂದರು. ಆ ಊರಿನಲ್ಲೇಕೆ ಭೂತಗಳಿವೆ ? ಏನು ಅದರ ಹಿಂದಿನ ಕತೆ ಅಂತೆಲ್ಲಾ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದೆ. ಕತೆಯನ್ನು ಸಂಕ್ಷಿಪ್ತವಾಗಿ ಹೇಳತೊಡಗಿದರು. ಬಹಳ ಹಿಂದೆ ಆ ಊರಿನ ಕೆಳಜಾತಿಯ ಹುಡುಗನಿಗೂ ಮತ್ತು ಅದೇ ಊರಿನ ಶ್ರೀಮಂತನ ಮಗಳಿಗೂ ಪ್ರೇಮಾಂಕುರವಾಗಿತ್ತು. ಆದರೆ ದುರಾದೃಷ್ಟವಶಾತ್ ಈ ವಿಷಯ ಊರಿನವರಿಗೆ ತಿಳಿದು ಆ ಹುಡುಗನನ್ನು ಕೊಲೆಗೈದರು. ನಂತರ ಆ ಊರಿನಲ್ಲಿ ವಿಚಿತ್ರ ಘಟನೆಗಳು ನಡೆಯಲು ಶುರುವಾದವಂತೆ. ಇದು ಆ ಹುಡುಗನ ಪ್ರೇತಾತ್ಮದ ಕಾಟ ಎಂದು ಭಾವಿಸಿ ಹೆದರಿದ ಗ್ರಾಮಸ್ಥರು ಊರಿಗೇ ಊರನ್ನೇ ಖಾಲಿ ಮಾಡಿ ಹೊರಟುಹೋದರಂತೆ. ಈಗಲೂ ನೀವು ಪಾಳು ಬಿದ್ದ ಮನೆಗಳನ್ನು ನೋಡಬಹುದು ಎಂದರು. ಸರಿ ಎಂದೆ. ಸ್ವಲ್ಪ ಸಮಯದ ನಂತರ, ಅಲ್ಲಿಯೇ ಇದ್ದ ಇನ್ನೊಬ್ಬರ ಬಳಿ ಕೇಳಿದಾಗ ಅವರು ಹೆಚ್ಚು ಪ್ರಚಲಿತದಲ್ಲಿರುವ ಮತ್ತೊಂದು ವರ್ಶನ್ ಹೇಳಿದರು. ಹಿಂದೆ ಇದ್ದ ಕುಲ್ಧರ ಎಂಬ ಊರು ಈಗೀನ ಜೈಸಲ್ಮೇರ್ ನಗರಕ್ಕಿಂತಲೂ ದೊಡ್ಡ ಹಾಗೂ ಮುಖ್ಯ ಊರಾಗಿತ್ತಂತೆ. ಆ ಊರಿನಲ್ಲಿದ್ದ ಪಾಲಿವಾಲ್ ಬ್ರಾಹ್ಮಣರು ವ್ಯಾಪಾರ,ಕೃಷಿಯಲ್ಲಿ ಬಹಳ ಮುಂದುವರೆದವರಾಗಿದ್ದು ಯಥೇಚ್ಚವಾದ ಸಂಪತ್ತನ್ನುಗಳಿಸಿಕೊಳ್ಳುತ್ತಾ ಕುಲ್ಧರದ ಊರನ್ನು ವ್ಯವಸ್ಥಿತವಾಗಿ ಕಟ್ಟಿಕೊಂಡಿದ್ದವರಂತೆ. ಜೈಸಲ್ಮೇರಿನ ರಾಜ ಇವರಿಗೆ ದುಪ್ಪಟ್ಟು ತೆರಿಗೆ ವಿಧಿಸಿ ಕಿರುಕುಳ ನೀಡುತಿದ್ದ. ಆ ಸಮಸ್ಯೆಯ ಜೊತೆಗೆ ಭೋನಸ್ ಎಂಬಂತೆ, ಆ ರಾಜ್ಯದ ದುರುಳ ಸೇನಾಧಿಪತಿಯ ಕಣ್ಣು ಕುಲ್ಧರ ಊರಿನ ಮುಖ್ಯಸ್ಥನ ಮಗಳ ಮೇಲೆ ಬೀಳುತ್ತದೆ. ನಿಗದಿತ ಗಡುವಿನೊಳಗೆ ನಿಮ್ಮ ಮಗಳನನ್ನು ನನಗೆ ಮದುವೆ ಮಾಡಿಕೊಡಬೇಕು ಇಲ್ಲದಿದ್ದರೆ ನನ್ನ ಕೋಪಕ್ಕೆ ಇಡೀ ಊರು ಗುರಿಯಾಗಬೇಕು ಎಂದು ಧಮಕಿ ಹಾಕಿ ಮರಳಿದ್ದನಂತೆ. ಈ ವಿಷಯವನ್ನು ಗುಪ್ತವಾಗಿ ರಾಜನ ಬಳಿಗೆ ಕೊಂಡೊಯ್ದು ನ್ಯಾಯ ಕೇಳಲಾಯಿತಾದರೂ ದುರ್ಬಲನಾಗಿದ್ದ ರಾಜನಿಗೆ ಸೇನಾಧಿಪತಿಯನ್ನು ಎದುರು ಹಾಕಿಕೊಳ್ಳುವುದು ಸಾಧ್ಯವಿರಲಿಲ್ಲವಂತೆ. ಚಿಂತೆಗೆ ಬಿದ್ದ ಊರಿನವರೆಲ್ಲಾ ಸಭೆ ಸೇರಿ ಈ ಊರನ್ನು ತೊರೆದು ಹೋಗುವುದೇ ಮಾರ್ಗವೆಂದು ನಿರ್ಧರಿಸಿ ರಾತ್ರೋ ರಾತ್ರಿ ಆದಷ್ಟು ಸಾಮಾನು, ಸರಂಜಾಮು, ಸಂಪತ್ತುಗಳನ್ನೆಲ್ಲ ತುಂಬಿಕೊಂಡು ಹೊರಟರಂತೆ. ಹಾಗೇ ಹೊರಟವರು ನಮ್ಮ ನಂತರ ಈ ಊರಿನಲ್ಲಿ ಯಾರು ಜೀವನ ನಡೆಸದಂತಾಗಿ ಈ ಊರು ಪಾಳು ಬೀಳಲಿ ಎಂದು ಶಾಪವನ್ನೂ ಹಾಕಿ ಜೊತೆಗೆ ತಂತ್ರ ವಿದ್ಯೆಗಳಿಂದ ಆತ್ಮಗಳನ್ನು ಬಿಟ್ಟರಂತೆ. ಆಗಿನಿಂದ ಈ ಊರು ಭೂತಗಳ ಊರಾಗಿ ಪಾಳು ಬಿದ್ದಿದೆಯಂತೆ. ಈಗಲೂ ರಾತ್ರಿ ವೇಳೆ ಅಲ್ಲಿ ಯಾರೂ ಉಳಿಯುವುದಿಲ್ಲ. ಕತೆಗಳನ್ನು ಕೇಳಿದ ನಂತರ ಈ ಊರನ್ನು ನೋಡಲೇಬೇಕು ಅಂತ ಅಂದುಕೊಂಡೆ. ಮರುದಿನ ಮಧ್ಯಾಹ್ನ ಜೈಸಲ್ಮೇರಿನ ಕೋಟೆ ನೋಡಿಕೊಂಡು ವಾಪಸ್ ಬರುವಾಗ ನಮ್ಮ ಡ್ರೈವರ್ ಅವರಿಗೆ ಕುಲ್ಧರಕ್ಕೆ ಹೋಗೋಣ ಎಂದೆ. ಜೊತೆಗಿದ್ದವರಿಗೇಕೋ ಭೂತಗಳನ್ನು ಭೇಟಿಯಾಗೋ ಮನಸ್ಸಿದ್ದಿರರಲಿಲ್ಲ. ಹಾಗಾಗಿ ಹಲವು ಸುತ್ತಿನ ಚರ್ಚೆಗಳ ನಂತರ ಕಡೆಗೂ ಅಲ್ಲಿಗೆ ಹೋದೆವು. ಭೂತಗಳನ್ನು ಹುಡುಕಿಕೊಂಡು ಬರುವವರು ಹೆಚ್ಚಾಗಿರುವ ಕಾರಣ ರಾಜಸ್ಥಾನ ಸರ್ಕಾರ ಈಗ ಆ ಊರಿನ ದೇವಸ್ಥಾನ ಮತ್ತು ಒಂದೆರಡು ದೊಡ್ಡ ಮನೆಗಳನ್ನು (ಬಹುಶಃ ಊರಿನ ಮುಖ್ಯಸ್ಥರ ಮನೆಗಳಿದ್ದಿರಬಹುದು) ರಿಪೇರಿ ಮಾಡಿದೆ. ಒಂದಷ್ಟು ಕುತೂಹಲ, ಭಂಡ ಧೈರ್ಯ , ಒಂದಷ್ಟು ಅಳುಕಿನಿಂದಲೇ ಊರಿನ ಒಳಕ್ಕೆ ಹೋದೆವು. ಈಗೀನ ಲೇ-ಔಟುಗಳಂತೆ ಪ್ಲಾನ್ ಮಾಡಿ ಇಟ್ಟಿಗೆಯಿಂದ ಕಟ್ಟಲಾಗಿರುವ ಸಾಲು ಮನೆಗಳು. ಚಾವಣಿಗಳೆಲ್ಲಾ ಕಾಲದ ಹೊಡೆತಕ್ಕೆ ಕುಸಿದು ಬಿದ್ದಿದ್ದವಾದರೂ, ಗೋಡೆಗಳು ಈಗಲೂ ಹಾಗೆ ಇವೆ. ಆ ದೊಡ್ಡ ಮನೆಗಳ ಒಳ ಹೊಕ್ಕರೇ ಕತೆ ಕೇಳಿದ್ದಕ್ಕೋ ಏನೋ ನನ್ನ ಮನಸ್ಸಿಗೆ ಅಲ್ಲೊಂದು ನೋವು, ಬೇಸರದ ಛಾಯೆ ಆವರಿಸಿರುವ ಅನುಭವವಾಯಿತು. ಹುಟ್ಟಿ ಬೆಳೆದು, ಬದುಕು ಕಟ್ಟಿಕಂಡ ಜಾಗವನ್ನು ರಾತ್ರೋರಾತ್ರಿ ಬಿಟ್ಟು ಹೊರಡುವಾಗ ಅವರಿಗೆಷ್ಟು ನೋವಾಗಿರಬಹುದು? ಬಹುಶಃ ಆ ದುಃಖದ ನಿಟ್ಟುಸಿರೇ ಅಲ್ಲಿನ ವಾತವರಣವನ್ನೆಲ್ಲಾ ಆವರಿಸಿದೆ ಎಂದೆನ್ನಿಸುತಿತ್ತು. ಆ ಮನೆಯೊಳಗೆ ಒಂದು ಸುರಂಗವಿತ್ತು. ಇಲ್ಲಿ ಅವರ ಸಂಪತ್ತುಗಳನ್ನು ಬಚ್ಚಿಡುತಿದ್ದರಂತೆ ಎಂದರು ನಮ್ಮ ಡ್ರೈವರ್. ಇಣುಕಿ ನೋಡಿದೆ ಕಗ್ಗತ್ತಲು. ಟಾರ್ಚ್ ಬೆಳಕನ್ನು ಒಳಗೆ ಬಿಟ್ಟು ನೋಡಿ ಇಳಿಯಬಹುದು ಎನಿಸಿತು. ಇಳಿದು ನೋಡೋಣ್ವಾ ಎಂದೆ. ಜೊತೆಗಿದ್ದವರೆಲ್ಲ ತೆಪ್ಪಗೆ ಬಾ ಎಂದು ನನ್ನ ಉತ್ಸಾಹಕ್ಕೆ ತಣ್ಣೀರೆರಚಿದರು. ಅವರಿಗ್ಯಾಕೋ ಕಾರು ಬಿಟ್ಟು ಇಳಿಯುವ ಮನಸ್ಸೇ ಇರಲಿಲ್ಲ. ನನಗೋ ಪ್ರತಿ ಮನೆಯೊಳಗೆ ಹೊಕ್ಕು, ಊರಿನ ಪ್ರತಿಮೂಲೆಯನ್ನು ನೋಡುವ ಸಾದ್ಯವಿದ್ದಲ್ಲಿ ದೆವ್ವಗಳನ್ನು ಕಾಣುವ ತವಕ. ಅಲ್ಲಿಂದ ಹೊರಡುವಾಗ ಪಾಲಿವಾಲ ಬ್ರಾಹ್ಮಣರಂತೆ ನನ್ನ ಮನಸ್ಸಿನ ತುಂಬಾ ಬೇಸರದ ಭಾವನೆ ಆವರಿಸಿಕೊಂಡಿತ್ತು. ನಾವು ಉಳಿದುಕೊಂಡಿದ್ದ ಜಾಗಕ್ಕೆ ಬಂದ ನಂತರ ನಮ್ಮ ನಾಲ್ಕು ಜನರಲ್ಲಿ ಇಬ್ಬರು ಅದ್ಯಾಕೋ ಸುಸ್ತಾಗ್ತಿದೆ ಅಂತ ಮಲಗಿಕೊಂಡರೇ, ಒಬ್ಬ ಹೊರಗೇ ಹೋಗೋ ಮೂಡ್ ಇಲ್ಲ ಎಂದ. ಕೊನೆಗೂ ನನಗೆ ಭೂತ ದರ್ಶನವಾಗಲಿಲ್ಲ ಅಂತ ಬೇಸರವಾಗಿತ್ತು. ಹೋಗಿದ್ದು ಮಟ ಮಟ ಮಧ್ಯಾಹ್ನವಾಗಿದ್ದರಿಂದ ಭೂತ ದರ್ಶನವಾಗಲಿಲ್ಲ ಬಹುಶಃ ನನ್ನ ಭಾಗ್ಯದಲ್ಲಿ ಬುದ್ಧಿಜೀವಿಗಳ ದರ್ಶನ ಮಾತ್ರವೇ ಬರೆದಿರುವುದು ಎನಿಸಿತು. ಅಲ್ಲಿಂದ ವಾಪಸ್ ಬರುವಾಗ ಡ್ರೈವರ್ ಆ ಊರಿನಲ್ಲಿ ನಡೆದ ಇನ್ನೊಂದು ಘಟನೆಯ ಬಗ್ಗೆ ಹೇಳಿದ. ಆ ಊರಿನಲ್ಲಿ ಈಗಲೂ ಪಾಲಿವಾಲ್ ಬ್ರಾಹ್ಮಣರು ಬಚ್ಚಿಟ್ಟಿರುವ ಸಂಪತ್ತಿದೆ ಎಂದು ತಿಳಿದುಕೊಂಡಿದ್ದ ವಿದೇಶಿಗನೊಬ್ಬ ಸನ್ಯಾಸಿಯ ವೇಷದಲ್ಲಿ ಇಲ್ಲಿ ಓಡಾಡುತ್ತಿದ್ದನಂತೆ. ಒಂದೆರಡು ಕಡೆ ಗುಂಡಿಯನ್ನು ತೆಗೆದಿದ್ದನಂತೆ. ಆ ನಂತರ ವಿಷಯ ಬಯಲಾಗಿ ಈಗ ಸರ್ಕಾರ ಅಲ್ಲೊಬ್ಬ ಸೆಕ್ಯುರಿಟಿ ಗಾರ್ಡ್ ನೇಮಕ ಮಾಡಿದೆ. ಇನ್ನು ಕುಲ್ಧರಲ್ಲಿ ನಿಜವಾಗಲೂ ವಿಚಿತ್ರ ಅನುಭವಗಳಾಗುತ್ತವೆಯೇ ಎಂದು ಪರಿಕ್ಷೀಸಲು ದೆಹಲಿಯ ಪಾರಾನಾರ್ಮಲ್ ಸೊಸೈಟಿಯವರು ಆಧುನಿಕ ಉಪಕರಣಗಳ ಜೊತೆಗೆ ಒಂದು ರಾತ್ರಿ ಅಲ್ಲಿಯೇ ಉಳಿದುಕೊಂಡಿದ್ದರಂತೆ. ಅಲ್ಲಿ ಅವರಿಗೆ ವಿಚಿತ್ರ ಅನುಭವಗಾಳಗಿದ್ದನ್ನು ಹೇಳಿಕೊಂಡಿದ್ದಾರೆ. ಯಾರೋ ಚಲಿಸಿದಂತಾಗುವುದು, ಹಿಂದಿನಿಂದ ಬಂದು ಮುಟ್ಟಿದ ಅನುಭವ, ಕಾಲಳತೆಯ ದೂರದಲ್ಲೇ ವಾತವರಣದ ವ್ಯತ್ಯಾಸವಾಗುವುದು ಇತ್ಯಾದಿ. ಕಡೆಗೂ ಅಲ್ಲಿ ದೆವ್ವವಿದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲವಂತೆ. ಇದನ್ನು ಓದಿದ ಮೇಲೆ ಭೂತಗಳ ಇರುವಿಕೆಯನ್ನು ನೀವು ನಂಬುತ್ತೀರಾ ಎನ್ನುವುದು ನಿಮ್ಮ ಪ್ರಶ್ನೆಯಾದರೇ, ಬುದ್ಧಿಜೀವಿಗಳಲ್ಲಿ ಬುದ್ಧಿ ಇದೆ ಎಂದು ನೀವು ನಂಬುವುದಾದರೇ ಕಣ್ಣಿಗೆ ಕಾಣದ ಭೂತಗಳೂ ಇವೆ ಎಂದೂ ನಂಬಬಹುದಲ್ಲವೇ? ಅಷ್ಟಕ್ಕೂ ಕೆಲ ವಿಷಯಗಳು ಅನುಭವಕ್ಕೆ ಬಂದಾಗಲೇ ಅರಿವಾಗುವುದು. ನನಗೆ ಅಂತ ಅನುಭವಗಳಾಗಿರುವುದರಿಂದ ನಮ್ಮ ಕಣ್ಣಿಗೆ ನಿಲುಕದ ಶಕ್ತಿಗಳಿವೆ ಎಂದು ನಂಬುತ್ತೇನೆ. ಬುದ್ಧಿಜೀವಿಗಳ ಕಿರುಚಾಟ, ಅರಚಾಟ, ಕಂಡೋರ ಮಕ್ಕಳನ್ನು ಹಾಳು ಬಾವಿಗೆ ತಳ್ಳುವ ಭೀಕರ ಮನಸ್ಥಿತಿಯನ್ನು ಹತ್ತಿರದಿಂದ ನೋಡಿದವರಿಗೆ ಭೂತ ಭಯಬೀಳಿಸುವುದಿಲ್ಲ ಬಿಡಿ. ಹಾಗಾಗಿ ಭೂತಗಳನ್ನು ನೋಡಬೇಕೆಂಬ ಆಸೆ ನನ್ನಲ್ಲಿನ್ನು ಉಳಿದುಕೊಂಡಿದೆ. ಹಾಗೇನಾದರೂ ಕಾಣಿಸಿದ ದಿನ ಆ ಅನುಭವಗಳನ್ನು ದಾಖಲಿಸುತ್ತೇನೆ. ಅಂದ ಹಾಗೆ ನಿಮಗೇನಾದರೂ ವಿಚಿತ್ರ ಶಕ್ತಿಗಳ ಅನುಭವಗಾಳಗಿವೆಯೇ? ಪಾರಾನಾರ್ಮಲ್ ಸೊಸೈಟಿಯವರು ದಾಖಲಿಸಿರುವ ವೀಡಿಯೋವನ್ನು ಇಲ್ಲಿ ನೋಡಬಹುದು ( ಕುಲ್ಧಾರ ದೆವ್ವಗಳು )

ಕೃಪೆ - ರಾಕೇಶ್ ಶೆಟ್ಟಿ ( ನಿಲುಮೆ ಬಳಗ)

Monday 21 March 2016

Hemophelia Web Application


                           Hemophilia an X-Linked Hierarchy

                                                  Madhusudhana .R. K                                                                           
                                    4th  semester ,  Dept. of  MCA                                                            
                                          R.V. College of Engineering                                                                
                                               rkmadhu619@gmail.com                                                                    

ABSTRACT: Hemophilia an X-Linked Hierarchy application includes information about the disease, automates the process of Hemophilia X-Linked Infector based Application. It also includes information of stages in which disease will spread. Public can register and see the contents related to Hemophilia. It contains gallery of Disease, Available medicines, latest events updates that are conducted related to Hemophilia. Information of Disease and Available medicines are updated. This includes details of users who are logged-in.
Keywords: disease, automates, application, medicines, logged-in

I.                   INTRODUCTION
This proposed project with its various module aimed to automate the information’s of disease includes simplified application for Admin to administrate the entire app and provides simple access to user interface for various user other needy people [1]. This provides the online mean for needy to take online available information for their suffering, for the same this application has easy to register and login module. This project has informative static and dynamic pages which contains the complete details of Haemophilia and related information [2].

 Objectives
The Main Objective of this project involves:
Ø  To allow users easy access to information about disease.
Ø  It should be designed to minimize amount of time required for data 
     management and  operation of system.
Ø  This application provides available medicines for the disease.
Ø  It tells what the level in which Hemophilia spread is.


II. BACKGROUND WORK
Preamble
            It is observed that the existing mechanism uses simple manual system of providing information [3]. Most of the Existing system of managing and processing the details of information takes much time. They use old system of mouth marketing to deal with medicines to the needy people and their internal system of working involve all manual records and no sort of electronic mean to automate the process [4].

Existing System
            In order to automate the process of application concerned with Haemophilia there are many web portal   with mere static content in it [5], our application offers the comprehensive details of Hemophilia an X-Linked Hierarchy along with the On line medicines and its usage.

Problem statement
                
·         The Application which is doing exclusive & unique projects to the society but the potential of the project is not reached to everyone.
·         Each & every user may not able to operate all the fields done by Application, but if he is allowed to review the contents and can suggest the admin regarding any changes to be made.
·         Even after long period of time, They are not able to reach out to the masses to promote the basic awareness about the Hemophilia [6][7].

III. METHODOLOGY
The Hemophelia an X-Linked Hierarchy minimizes the need to visit hospital every time. This system allows the user to get details of the disease as and when they wish to get. They can also see the available medicines with respect to the stages of Hemophilia [8][9] .
      The software developed has the access to authenticated admin with restricted access.
·         Login is provided to the admin with the username and the password to ensure that it is accessed by authenticated user.
·         Admin is one who has control over entire System and also on Member authentication. He has the power to add or edit the member details.
·         Member need to enter name and password to login. Once they log in they can access information and they can send queries to the admin.
·         Admin can update the medicines and Gallery list , users will get updated list when they logged in for next time [10].
·         Once done with the session , user can sign out and further they should provide log-in details again.
IV. RESULT
Image 1: Login Page
Image 1, shows the login page of the project where admin/user will enter the user name and password to access the application. If the username and password is mismatched then it will shows an error.


Image 2 : Home page
Image 2, shows the Home page of the project. This contains the different modules used and link to access the contents.
Image 3: Hemophilia X-Linked Type-4
Image 3 describes the type-4 of Hemophilia where the disease in from father is affected and
Mother is carrier of Hemophila. The possible outcome for their kids.

Image 4: Gallery of the Project
Image 4 shows the gallery of the project which contains the link for Images and Videos.
Here only admin can add photos and videos, users are allowed to access the gallery contents.


VI. CONCLUSION
            The application is designed for the beneficial of the users to know about the Hemophilia in a single application. As the user perspective the application is designed in such a way that gives attractive user interfaces, authentication and authorization. By the testing result this application working fine for all the possible inputs, if you found any bus that can be resolve in near coming version.

 REFERENCES
[1]   Peyvandi F, Jayandharan G, Chandy M, et al. Genetic diagnosis of haemophilia and other inherited bleeding                      disorders. Haemophilia. 2006; 12:82-89. Bolton-Maggs PH, Pasi KJ. Haemophilias A and B. Lancet. 2003 May                 24;361(9371):1801-9.
[2]   Collins PW, Hirsch S, Baglin TP, et al. Acquired hemophilia A in the United Kingdom: a 2-yearnational                             surveillance study by the United Kingdom Haemophilia Centre Doctors' Organisation.  2007; 109:1870-1877.
   
[6]   Chitlur M, Kulkarni R (2013). Hemophilia and related conditions. In ET Bope, RD Kellerman, eds., Conn's Current            Therapy 2013, pp. 803–810.
[7]   Friedman KD, Rodgers GM (2009). Inherited coagulation disorders. In JP Greer et al., eds., Wintrobe's Clinical                    Hematology, 12th ed., vol. 2, pp. 1379–1424.
[8]     Roberts HR, et al. (2010). Hemophilia A and haemophilia B. In K Kaushansky et al., eds., Williams  Hematology,            8th  ed., pp. 2009–2029. New York: McGraw-Hill.
[9]    Srivastava A, et al. (2013). Guidelines for the management of hemophilia. Haemophilia, 19(1): e1–e47. Also                       available online: http://www.wfh.org/en/page.aspx?pid=1270.
[10]    Elmasri and Navathe, Fundamentals of Database Systems 3rd Edition, Pearson Education, year 2000.



                                                                                                                       

Sunday 20 March 2016

White Holes! may or may not exists..

ವ್ಹೈಟ್ ಹೋಲ್ಸ್ ಇವೆಯೇ ?

       ಬ್ಲಾಕ್ ಹೋಲ್ಸ್ ಗೊತ್ತು. ಈ ವ್ಹೈಟ್ ಹೋಲ್ಸ್ ಏನು?ಬ್ಲಾಕ್ ಹೋಲ್ ನಲ್ಲಿ ಒಳಗೆ ಹೋದ ಯಾವುದೂ ವಾಪಸ್ ಬರುವುದಿಲ್ಲ ಅಂತ ನಂಬಿಕೆ. ( ಇದಕ್ಕೆ ವಿರುದ್ಧ ಬ್ಲಾಕ್ ಹೋಲ್ ಬೆಳಕನ್ನು ವಾಂತಿ ಮಾಡಿದ್ದು ಹೋದ ತಿಂಗಳು ವರದಿ ಆಗಿದೆ ಅದಿರಲಿ ) ಬ್ಲಾಕ್ ಹೋಲ್ ನಲ್ಲಿ ಒಳ ಹೋದ ಎಲ್ಲವೂ ಇನ್ನೊಂದು ಬದಿಯಿಂದ ಹೊರ ಬರುವಂತಿದ್ದರೆ? ಅದೇ ವ್ಹೈಟ್ ಹೋಲ್. ಅಂದರೆ ವ್ಹೈಟ್ ಹೋಲ್ ನಲ್ಲಿ ಯಾವುದೇ ವಸ್ತು ಒಳಗೆ ಹೋಗುವಂತಿಲ್ಲ. ಎಲ್ಲಾ ಹೊರಗೆ ಬರುವುದು ಮಾತ್ರ. ಬೆಳಕೂ ಕೂಡ. ಒಂತರಾ ಒನ್ ವೇ. ಬ್ಲಾಕ್ ಹೋಲ್ ನಲ್ಲಿ ಒಳಗೆ ಹೋದ ಇನಫಾರ್ಮೇಶನ್ ವ್ಹೈಟ್ ಹೋಲ್ ನಿಂದ ಹೊರಗೆ. ಸದ್ಯಕ್ಕೆ ಇದು ಥಿಯರಿ ಮಾತ್ರ ಯಾವುದೇ ವ್ಹೈಟ್ ಹೋಲ್ ಪತ್ತೆಯಾಗಿಲ್ಲ. ಹೆಚ್ಚಿನ ವಿಜ್ಞಾನಿ ಗಳು ಇದನ್ನು ಒಪ್ಪುತ್ತಾ ಇಲ್ಲ. ಆದರೂ ಹಾಕಿಂಗ್ ರೇಡಿಯೇಶನ್ ಥಿಯರಿ ಇದಕ್ಕೆ ಹೊಂದುತ್ತಾ ಇದೆ.ಆದರೆ ಎನರ್ಜಿ ಹುಟ್ಟಿಸಲೂ ನಾಶ ಮಾಡಲೂ ಸಾಧ್ಯವಿಲ್ಲ. ಏನಿದ್ದರೂ ಎನರ್ಜಿ ಕನ್ವರ್ಟ ಆಗುತ್ತದೆ ಅಷ್ಟೇ ಅನ್ನುವದು ಫಿಸಿಕ್ಸ ನ ಮೂಲ ನಿಯಮ ಇದರ ಪ್ರಕಾರ ಬ್ಲಾಕ್ ಹೋಲ್ ನಲ್ಲಿ ಒಳಗೆ ಹೋದದ್ದೂ ಹೊರ ಬರಲೇ ಬೇಕು ಅನ್ನುವುದು ವಾದ. ಆದರೆ ಫಿಸಿಕ್ಸ ನ ಈ ನಿಯಮ ಬಾಹ್ಯಾಕಾಶದಲ್ಲಿ ಲಾಗೂ ಇಲ್ಲ. ಬೆಳಕು ಚಲಿಸುವಾಗ ಎನರ್ಜಿ ಲಾಸ್ ಆಗುತ್ತದೆ ಕನ್ವರ್ಟ ಆಗುವುದಿಲ್ಲ ಅಂತ ಗೊತ್ತಾಗಿ ಮೂಲ ನಿಯಮವೇ ಮುರಿದು ಬಿದ್ದಿದೆ. 2006 ನಲ್ಲಿ ಸಡನ್ನಾಗಿ ಗ್ಯಾಮ್ಮಾ ರೇ ಬ್ಲಾಸ್ಟ್ ಕಂಡು ಬಂದಿತು. ಆದರೆ ಇದಕ್ಕೆ ಯಾವುದೇ ಸೂಪರನೋವಾ ಕಾರಣ ವಾಗಿರಲಿಲ್ಲ. ಬೇರೆ ಯಾವುದೇ ಸೋರ್ಸ್ ಕಂಡು ಬರಲೂ ಇಲ್ಲ. ಇದು ವ್ಹೈಟ್ ಹೋಲ್ ನಿಂದ ಬಂದಿರಬಹುದೇ ಅಂತ ಪ್ರಶ್ನೆ. ವ್ಹೈಟ್ ಹೋಲ್ ಇವೆಯೇ ? ಗೊತ್ತಿಲ್ಲ!
   ಮೂಲ ಸಂಪಾದಕರು " ಮಮತಾ ನಾಯಕ್ (ರುಚಿತ)"

      a white hole is a hypothetical region of spacetime which cannot be entered from the outside, although matter and light can escape from it. In this sense, it is the reverse of a black hole, which can only be entered from the outside and from which matter and light cannot escape. White holes appear in the theory of eternal black holes. In addition to a black hole region in the future, such a solution of the Einstein field equations has a white hole region in its past. However, this region does not exist for black holes that have formed through gravitational collapse, nor are there any known physical processes through which a white hole could be formed. No white hole has ever been observed. Also, the laws of thermodynamics say that the net entropy in the universe can either increase or remain constant. This rule is violated by white holes, as they tend to decrease entropy.

Thursday 17 March 2016

Here is my first website design. It was my short time work (3 Days). Much validation is not done due to shortage of time. Hope to update the valid script in very short coming version.

This website is designed using HTML-5 and CSS3  this supports almost all recent browsers.
Some functionalities will be not work as per the design issue, if the browser is not updated to latest version.

This website uses backend  MySQL database for storing the required field elements.

see to this and comment back if any bugs found.
Thank you
Click Here!